ಮಂಗಳವಾರ, ಡಿಸೆಂಬರ್ 9, 2025

ಆಗದು ಎಂದು ಕೈ ಕಟ್ಟಿ ಕುಳಿತರೆ...!! | ಲೇಖನ | ವೆಂಕಟೇಶ ಚಾಗಿ | aagadu endu kai katti kulitare | lekhana | venkatesh chagi

 

ಆಗದು ಎಂದು ಕೈ ಕಟ್ಟಿ ಕುಳಿತರೆ...!!

ಲೇಖನ

ಜೀವನದಲ್ಲಿ ಕಷ್ಟ ಸುಖಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ್ಣವಾಗಿ ಕಷ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ್ಣವಾಗಿ ಸುಖವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ್ಣ ಸುಖದಿಂದ ಬದುಕಲಿ ಎಂದು ದೇವರು ಆಶೀರ್ವಾದ ಮಾಡಿ ಕಳುಹಿಸಿರುವುದಿಲ್ಲ ಅಥವಾ ಕಷ್ಟವೇ ಇವನ ಬದುಕಾಗಲಿ ಎಂದು ಶಾಪ ನೀಡಿ ಕಳುಹಿಸಿರುವುದಿಲ್ಲ. ಬದುಕು ಶೂನ್ಯದಿಂದಲೇ ಪ್ರಾರಂಭವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಖದ ಯಶಸ್ಸಿನ ಅನುಭವ ದೊರೆಯುತ್ತದೆ. ಯಶಸ್ಸಿನ  ಶಿಖರವೇರುವಾಗ ಮಾಡಬೇಕಾದ ಪ್ರಯತ್ನವೇ ಕಷ್ಟವೆನಿಸುತ್ತದೆಯೆರ ಹೊರತು ಕಷ್ಟವೆಂಬುದು ಬೇರೊಂದಿಲ್ಲ.

ಯಶಸ್ಸು ಪಡೆಯುವಂತಹ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿಕೊಂಡು ಕುಳಿತಿರುವುದಿಲ್ಲ. ಕ್ರೀಡೆ , ಸಿನಿಮಾ , ರಾಜಕೀಯ , ಕಲೆ ಸಾಹಿತ್ಯ , ವಿಜ್ಞಾನ , ಕೃಷಿ , ಆಡಳಿತ , ಸೇವೆ  ಹೀಗೆ ಹಲವಾರು ಕ್ಷೇತ್ರಗಳು ಅವಕಾಶಗಳು ನಮ್ಮ ಮುಂದಿವೆ. ಯಾವುದೇ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಯಾವುದೇ ರಂಗವನ್ನು ಆಯ್ಕೆಮಾಡಿಕೊಂಡರೂ ಯಶಸ್ಸು ಪಡೆಯುವುದು ಅಷ್ಟು ಸುಲಭವಲ್ಲ. ಯಶಸ್ಸಿಗಾಗಿ ಶ್ರಮ ಪಡದೇ ಇರುವುದು ಜೀವನವೇ ಅಲ್ಲ. 

ಒಂದು ಪಕ್ಷಿ ತಾನು ಒಂದು ಗೂಡು ಕಟ್ಟಿಕೊಂಡು ಅದರಲ್ಲಿ ಮೊಟ್ಟೆ ಇಟ್ಟು , ಕಾವು ಕೊಟ್ಟು , ಮರಿಗಳನ್ನು ಮಾಡಿ  , ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ ಪ್ರಯತ್ನ ಅಷ್ಟು ಸುಲಭವಲ್ಲ. ಅಯ್ಯೋ ಅಷ್ಟೊಂದು ಕಷ್ಟ ನನಗ್ಯಾಕೆ ಎಂದು ಪಕ್ಷಿ ಯಾವತ್ತೂ ಸುಮ್ಮನೆ ಕುಳಿತಿಲ್ಲ. ಗೂಡು ಕಟ್ಟಲು ಸೂಕ್ತವಾದ ಸ್ಥಳ ಹುಡುಕುವುದೇ ಅದರ ಮುಂದಿರುವ ಅತೀ ದೊಡ್ಡ ಸವಾಲು. ಆದರೂ ಸಮಯ ವ್ಯರ್ಥ ಮಾಡದೇ ಅಂತಹ ಸ್ಥಳವನ್ನು ಹುಡುಕುತ್ತದೆ. ತನ್ನ ಶ್ರಮ ಮುಂದಿನ ದಿನಗಳಲ್ಲಿ ವ್ಯರ್ಥ ಆಗಬಾರದು ಎಂಬುದು ಅದರ ಉದ್ದೇಶ. ಗೂಡು ಕಟ್ಟುವುದೂ ಅಷ್ಟು ಸುಲಭವಲ್ಲ ಹಕ್ಕಿಗೆ.‌ ಹಲವಾರು ಪ್ರದೇಶಗಳಿಗೆ ತೆರಳಿ ತನ್ನ ಗೂಡಿಗೆ ಬೇಕಾದ ಸೂಕ್ತವಾದ ಹುಲ್ಲು ಕಡ್ಡಿಗಳನ್ನು ಆಯ್ದುಕೊಂಡು ಬಂದು ಹಲವು ದಿನಗಳ ವರೆಗೆ ಶ್ರಮವಹಿಸಿ ಗೂಡು ಕಟ್ಟುತ್ತದೆ. ನಂತರ ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳ ಪೋಷಣೆ ಮಾಡುತ್ತದೆ. ಇದು ಹಕ್ಕಿಯ ಜೀವನ.

 ಹಕ್ಕಿಯ ಬದುಕಿನಲ್ಲೂ ಹಲವಾರು ಕಷ್ಟಗಳು ಎದುರಾತ್ತವೆ ಅಂದ ಮೇಲೆ ಮನುಷ್ಯನ ಬದುಕಿನಲ್ಲೂ ಕಷ್ಟಗಳು ಬರದೇ ಇರುವುದಿಲ್ಲ. ಮಾಡಬೇಕಾದ ಕೆಲಸ ಕಾರ್ಯ ಸಾಧ್ಯವಿಲ್ಲ ಎಂದು ಕುಳಿತಾಗ ಜೀವನ ಸಾರ್ಥಕವಾಗುವುದಾದರೂ ಹೇಗೆ..? ಬದುಕನ್ನು ಬದುಕಿಸಿ. ಬದುಕಿ ಸಾಧಿಸಿ. ಸಾಧಿಸಿ ಬದುಕನ್ನು ಗೆಲ್ಲಿಸಿ.

=> ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ